Honorable Chief Minister | Government of Karnataka
Shri G T DeveGowda
Honorable MLA and President
ಇದರ ಪರಿಣಾಮವಾಗಿ ಸಹಕಾರ ಚಳುವಳಿ ರಾಷ್ಟ್ರದ ಹಸಿರು ಕ್ರಾಂತಿ, ಶ್ವೇತ ಕ್ರಾಂತಿಗೆ ನಾಂದಿ ಹಾಡಿತು. ರಾಷ್ಟ್ರದ ಅರ್ಥ ವ್ಯವಸ್ಥೆಗೆ ಹೊಸ ರೂಪ ನೀಡಲು ಮುಂದಾಯಿತು. ನೆಹರೂ ಅವರ ಬದ್ಧತೆಯಿಂದ ಅವರ ಆಶಯಗಳು ಚಳುವಳಿಯ ಮೂಲಕ ಸಾಕಾರಗೊಂಡವು.
ನವೆಂಬರ್ ದಿನಾಂಕ: 14, ಪಂಡಿತ್ ನೆಹರೂ ಅವರ ಹುಟ್ಟು ಹಬ್ಬ. ನೆಹರೂ ಅವರು ಸಹಕಾರ ಕ್ಷೇತ್ರದ ಬೆಳವಣಿಗೆಗಾಗಿ ನೀಡಿದ ಬೆಂಬಲಕ್ಕೆ ಕೃತಜ್ಞತೆ ಸೂಚಿಸುವ ಹಿನ್ನೆಲೆಯಲ್ಲಿ ಕಳೆದ 67 ವರ್ಷಗಳಿಂದ ಅವರ ಜನ್ಮ ದಿನದಿಂದ ಆರಂಭವಾಗಿ 7 ದಿನಗಳ ಕಾಲ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆಯನ್ನು ಜಿಲ್ಲಾ ಮಟ್ಟ ಮತ್ತು ರಾಜ್ಯಮಟ್ಟದಲ್ಲಿ ನಡೆಸಿಕೊಂಡು ಬರುತ್ತಿದ್ದೇವೆ.
ಒಟ್ಟಾರೆಯಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನೇತೃತ್ವದಲ್ಲಿ ಪ್ರತಿ ವರ್ಷ ಅಂದಾಜು 210 ಸ್ಥಳಗಳಲ್ಲಿ ಸಹಕಾರ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ. ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಸುಮಾರು 3 ಲಕ್ಷಕ್ಕೂ ಹೆಚ್ಚು ಸಹಕಾರಿಗಳು ಭಾಗವಹಿಸುತ್ತಿದ್ದಾರೆ.
67 ವರ್ಷಗಳ ಸಹಕಾರ ಸಪ್ತಾಹ ಆಚರಣೆ — ನೆಹರೂ ಅವರ ಕನಸುಗಳಿಗೆ ಸಾಕಾರ, ಸಹಕಾರಿ ಭಾರತದ ನಿರ್ಮಾಣ.